top of page

Aarige Vadhuvaade ಆರಿಗೆ ವಧುವಾದೆ ಅಂಬುಜಾಕ್ಷಿ

  • Writer: madhwamaanasa3
    madhwamaanasa3
  • Aug 20, 2023
  • 1 min read

Updated: Jan 11

ಆರಿಗೆ ವಧುವಾದೆ ಅಂಬುಜಾಕ್ಷಿ ।

ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕುಮಿ ॥


ಶರಧಿ ಬಂಧನ ರಾಮಚಂದ್ರ ಮೂರುತಿಗೋ

ಪರಮಾತ್ಮ ಅನಂತ ಪದ್ಮನಾಭನಿಗೋ ।

ಸರಸಿಜನಾಭ ಜನಾರ್ಧನ ಮೂರುತಿಗೋ

ಎರಡು ಹೊಳೆಯ ರಂಗ ಪಟ್ಟಣ ವಾಸಗೋ ॥


ಚಲುವ ಬೇಲೂರು ಚೆನ್ನಿಗರಯನಿಗೋ

ಕೆಳದಿ ಹೇಳು ಉಡುಪಿಯ ಕೃಷ್ಣರಾಯಗೋ ।

ಇಳೆಯೊಳು ಪಂಢರಪುರ ವಿಠಲೇಶಗೋ

ನಳಿನಾಕ್ಷಿ ಪೇಳು ಬದರೀನಾರಯಣಗೋ ॥


ಶರಣಾಗತರ ಪೊರೆವ ಶಾರಂಗ ಪಾಣಿಗೊ

ವರಗಳ ನೀವ ಶ್ರೀ ಶ್ರೀನಿವಾಸನಿಗೊ ।

ಕುರುಕುಲಾಂತಕ ನಮ್ಮ ರಾಜಗೋಪಾಲಗೋ

ಸ್ಥಿರವಾಗಿ ಪೇಳು ಪುರಂದರವಿಠಲಗೋ ॥



Recent Posts

See All
Manava Shodhisabeku Nithya ಮನವ ಶೋಧಿಸಬೇಕು ನಿತ್ಯಾ

ಮನವ ಶೋಧಿಸಬೇಕು ನಿತ್ಯಾ ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ ||ಮನವ|| ಧರ್ಮ ಅಧರ್ಮ ವಿಂಗಡಿಸಿ ಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ ||1|| ಪರಬೊಮ್ಮ...

 
 
 
Bideno Bideno ninna ಬಿಡೆನೋ ಬಿಡೆನೋ ನಿನ್ನ ಚರಣ

ಬಿಡೆನೋ ಬಿಡೆನೋ ನಿನ್ನ ಚರಣ ಕಮಲವ ಎನ್ನ ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ ಬಲಿಯ ದಾನವ ಬೇಡಿ ಅಳದೆ ಬ್ರಹ್ಮಾಂಡ ನಳಿನೋದ್ಭವ ಬಂದು ಪಾದವ ತೊಳೆಯೆ ಉಗುರಿನ...

 
 
 
Uma Katyayini ಉಮಾ ಕಾತ್ಯಾಯಿನೀ ಗೌರೀ

ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿ ರಮೆಯರಸನ ಪದಕಮಲಮಧುಪೆ ನಿತ್ಯ ಅಮರವಂದಿಪೆ ಗಜಗಮನೆ ಭವಾನೀ ಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನತಗುಣಗಣ...

 
 
 

Comentarios


9916678573

©2022 by Madhwamaanasa. 

bottom of page