top of page

Govinda Narayana ಗೋವಿಂದ ನಾರಾಯಣ

  • Writer: madhwamaanasa3
    madhwamaanasa3
  • Aug 20, 2023
  • 1 min read

Updated: Jan 11

ಗೋವಿಂದ ನಾರಾಯಣ

ಗೋವಿಂದ ನಾರಾಯಣ |

ಗೋವರ್ಧನ ಗಿರಿಯನೆತ್ತಿದ

ಗೊವಿಂದ ನಮ್ಮ ರಕ್ಷಿಸೈ ||

ಮಂಚ ಬಾರದು ಮಡದಿ ಬಾರಳು

ಕಂಚುಕನ್ನಡಿ ಬಾರವು |

ಸಂಚಿತಾರ್ಥದ ದ್ರವ್ಯ ಬಾರದು

ಮುಂಚೆ ಮಾಡಿರೊ ಧರ್ಮವ ||

ಅರ್ಥವ್ಯಾರಿಗೆ ಪುತ್ರರು ಯಾರಿಗೆ

ಮಿತ್ರ ಬಾಂಧವರು ಯಾರಿಗೆ |

ಕರ್ತೃ ಯಮನವರೆಳೆದು ಒಯ್ದಾಗ

ಅರ್ಥಪುತ್ರರು ಕಾಯ್ವರೆ ||

ತಂದು ಬಂದರೆ ತನ್ನ ಪುರುಷನ

ಬಂದಿರಾ ಬಳಲಿದಿರಾ ಎಂಬಳು |

ಒಂದು ದಿವಸ ತಾರದಿದ್ದರೆ

ಹಂದಿನಾಯಿಯಂತೆ ಬೊಗಳುವಳು ||

ಪ್ರಾಣವಲ್ಲಭೆ ತನ್ನ ಪುರುಷನ

ಕಾಣದೆ ನಿಲ್ಲಲಾರಳು |

ಪ್ರಾಣಹೋಗುವ ಸಮಯದಲ್ಲಿ

ಜಾಣೆ ಕರೆದರೆ ಬಾರಳು ||

ಉಂಟು ಕಾಲಕೆ ನಂಟರಿಷ್ಟರು

ಬಂಟರಾಗಿ ಕಾಯ್ದರು |

ಕಂಟಕ ಯಮನವರು ಎಳೆವಾಗ

ನೆಂಟರಿಷ್ಟರು ಬಾರರು ||

ಒಡವೆ ಅರಸಿಗೆ ಒಡಲು ಅಗ್ನಿಗೆ

ಮಡದಿ ಮತ್ತೊಬ್ಬ ಚೆಲುವಗೆ |

ಬಡಿದು ಹೊಡೆದು ಯಮನವರೆಳೆವಾಗ

ಎಡವಿ ಬಿದ್ದಿತು ನಾಲಗೆ ||

ದಿಟ್ಟತನದಲಿ ಪಟ್ಟವಾಳುವ

ಕೃಷ್ಣರಾಯನ ಚರಣವ |

ಮುಟ್ಟಿ ಭಜಿಸಿರೊ ಸಿರಿಪುರಂದರ

ವಿಠಲೇಶನ ಚರಣವ ||



Recent Posts

See All
Bideno Bideno ninna ಬಿಡೆನೋ ಬಿಡೆನೋ ನಿನ್ನ ಚರಣ

ಬಿಡೆನೋ ಬಿಡೆನೋ ನಿನ್ನ ಚರಣ ಕಮಲವ ಎನ್ನ ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ ಬಲಿಯ ದಾನವ ಬೇಡಿ ಅಳದೆ ಬ್ರಹ್ಮಾಂಡ ನಳಿನೋದ್ಭವ ಬಂದು ಪಾದವ ತೊಳೆಯೆ ಉಗುರಿನ...

 
 
 
Uma Katyayini ಉಮಾ ಕಾತ್ಯಾಯಿನೀ ಗೌರೀ

ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿ ರಮೆಯರಸನ ಪದಕಮಲಮಧುಪೆ ನಿತ್ಯ ಅಮರವಂದಿಪೆ ಗಜಗಮನೆ ಭವಾನೀ ಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನತಗುಣಗಣ...

 
 
 
Manava Shodhisabeku ಮನವ ಶೋಧಿಸಬೇಕು ನಿತ್ಯಾ

ಮನವ ಶೋಧಿಸಬೇಕು ನಿತ್ಯಾ ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ ||ಮನವ|| ಧರ್ಮ ಅಧರ್ಮ ವಿಂಗಡಿಸಿ ಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ ಪರಬೊಮ್ಮ...

 
 
 

Comments


9916678573

©2022 by Madhwamaanasa. 

bottom of page