top of page

Manava Shodhisabeku ಮನವ ಶೋಧಿಸಬೇಕು ನಿತ್ಯಾ

  • Writer: madhwamaanasa3
    madhwamaanasa3
  • Dec 22, 2024
  • 1 min read

Updated: Jan 11

ಮನವ ಶೋಧಿಸಬೇಕು ನಿತ್ಯಾ


ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ


||ಮನವ||



ಧರ್ಮ ಅಧರ್ಮ ವಿಂಗಡಿಸಿ


ಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ


ಪರಬೊಮ್ಮ ಮೂರುತಿ ಪಾದಕಮಲವ ಭಜಿಸಿ


||ಮನವ||



ತನುವ ಖಂಡಿಸಿ ಒಮ್ಮೆ ಮಾಣೋ


ನಿನ್ನಮನವ ದಂಡಿಸಿ


ಪರಮಾತ್ಮನ್ನ ಕಾಣೋ||ತನುವ||


ಕೊನೆಗೆ ನಿನ್ನೊಳಗೆ ನೀ ಜಾಣೋ


ಮುಕ್ತಿ ನಿನಗೆ ದೂರಿಲ್ಲವು ಒಂದೇ ಗೇಣೊ


||ಮನವ||



ಆತನವರಿಗೆ ಕೇಡಿಲ್ಲ ,ಅವ ಪಾತಕ


ಪತಿತ ಸಂಗವ ಮಾಡುವನಲ್ಲ


||ಆತನವರಿಗೆ||


ನೀತಿವಂತರು ಕೇಳಿರೆಲ್ಲ


ನಮಗಾತನೆ ಗತಿ ಈವ ಪುರಂದರವಿಠಲ


||ಮನವ||

Recent Posts

See All
Bideno Bideno ninna ಬಿಡೆನೋ ಬಿಡೆನೋ ನಿನ್ನ ಚರಣ

ಬಿಡೆನೋ ಬಿಡೆನೋ ನಿನ್ನ ಚರಣ ಕಮಲವ ಎನ್ನ ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ ಬಲಿಯ ದಾನವ ಬೇಡಿ ಅಳದೆ ಬ್ರಹ್ಮಾಂಡ ನಳಿನೋದ್ಭವ ಬಂದು ಪಾದವ ತೊಳೆಯೆ ಉಗುರಿನ...

 
 
 
Uma Katyayini ಉಮಾ ಕಾತ್ಯಾಯಿನೀ ಗೌರೀ

ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿ ರಮೆಯರಸನ ಪದಕಮಲಮಧುಪೆ ನಿತ್ಯ ಅಮರವಂದಿಪೆ ಗಜಗಮನೆ ಭವಾನೀ ಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನತಗುಣಗಣ...

 
 
 
Mukhya Karana Vishnu ಮುಖ್ಯ ಕಾರಣ ವಿಷ್ಣು

ಮುಖ್ಯ ಕಾರಣ ವಿಷ್ಣು ಸ್ವತಂತ್ರನೇ ಸತ್ಯ | ಸತ್ಯರ ಪೋಷಕ ಸಿರಿ ಅಜಭವಾದ್ಯಮರೇಶ || ಮುಖ್ಯ ಕಾರಣ ವಿಷ್ಣು ಸ್ವತಂತ್ರನೇ ಸತ್ಯ ತಿಳಿವೆಂಬುವವ ನೀನೇ ತಿಳಿದು ತಿಳಿಸುವ...

 
 
 

Comentarios


9916678573

©2022 by Madhwamaanasa. 

bottom of page