top of page

Mukhya Karana Vishnu ಮುಖ್ಯ ಕಾರಣ ವಿಷ್ಣು

  • Writer: madhwamaanasa3
    madhwamaanasa3
  • Jan 13, 2024
  • 1 min read

Updated: Jan 11

ಮುಖ್ಯ ಕಾರಣ ವಿಷ್ಣು ಸ್ವತಂತ್ರನೇ ಸತ್ಯ |

ಸತ್ಯರ ಪೋಷಕ ಸಿರಿ ಅಜಭವಾದ್ಯಮರೇಶ ||

ಮುಖ್ಯ ಕಾರಣ ವಿಷ್ಣು ಸ್ವತಂತ್ರನೇ ಸತ್ಯ


ತಿಳಿವೆಂಬುವವ ನೀನೇ ತಿಳಿದು ತಿಳಿಸುವ ನೀನೇ

ತಿಳಿವ ವಸ್ತುವು ನೀನೇ ತೀರ್ಥಪದ ನೀನೇ |

ತಿಳಿದುದಕೆ ಫಲ ನೀನೇ ತಿಳಿಯಗೊಡದವ ನೀನೇ

ತಿಳಿವ ಸ್ವತಂತ್ರ ನಿನ್ನದು ತಿಳಿಸೋ ಸರ್ವೇಶ ||

 

ಧ್ವನಿ ವರ್ಣೋದಯ ಶಬ್ದ ವಾಚ್ಯನು ನೀನೇ

ಗುಣ ದೇಶ ಕಾಲ ಕರ್ಮಗಳು ನೀನೇ |

ತನುಕರಣ ವಿಷಯ ಮನ ಜೀವ ಸ್ವಾಮಿಯು ನೀನೇ

ಅಣು ಮಹಜ್ಜಗದ ಬಹಿರಂತರ್ವ್ಯಾಪಕನೇ ||

 

ವ್ಯಾಸ ಕಪಿಲ ಹಯಾಧ್ಯ ಧನ್ವಂತ್ರೀ ವೃಷಭ

ಮಹಿದಾಸ ದತ್ತಾತ್ರೇಯಾದಿ ಅಮಿತ ರೂಪ |

ಈಸು ರೂಪದಿ ಅಧಿಕಾರಿಗಳಿಗೊಲಿದು

ಪೋಷಕನು ಆದೇ ಕೃಪಾಳುವೇ ಶ್ರೀಶ ||

 

ಚೇತನನು ನಾನು ನೀ ಚೇಷ್ಟೆಯನು ಮಾಡಿಸಲು

ಅಚೇತನನು ಸರಿ ನೀನು ಸುಮ್ಮನಿರಲು |

ಯಾತರವ ನಾನಯ್ಯ ನಿನ್ನಾಧೀನವು ಏಲ್ಲ

ಚೇತನನು ಅಹುದು ನೀ ಚಲಿಸೆ ಚಲಿಸುವನು ||

 

ತಿಳಿಯೆನ್ನುವುದಕ್ಕಾಗಿ ತಿಳಿಯತಕ್ಕದ್ದು ನೀನೇ

ತಿಳಿಸೋ ಸೋತ್ತಮರು ತಿಳಿದ ಶೇಷ |

ತಿಳಿವಲ್ಲಿ ತಿಳುಪಲ್ಲಿ ತಿಳುವಣಿಕೆ ನೀನಾಗಿ

ಚಲಿಸದಲೇ ಮನ ನಿಲಿಸೋ ಗೋಪಾಲವಿಠಲ ||

Recent Posts

See All
Bideno Bideno ninna ಬಿಡೆನೋ ಬಿಡೆನೋ ನಿನ್ನ ಚರಣ

ಬಿಡೆನೋ ಬಿಡೆನೋ ನಿನ್ನ ಚರಣ ಕಮಲವ ಎನ್ನ ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ ಬಲಿಯ ದಾನವ ಬೇಡಿ ಅಳದೆ ಬ್ರಹ್ಮಾಂಡ ನಳಿನೋದ್ಭವ ಬಂದು ಪಾದವ ತೊಳೆಯೆ ಉಗುರಿನ...

 
 
 
Uma Katyayini ಉಮಾ ಕಾತ್ಯಾಯಿನೀ ಗೌರೀ

ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿ ರಮೆಯರಸನ ಪದಕಮಲಮಧುಪೆ ನಿತ್ಯ ಅಮರವಂದಿಪೆ ಗಜಗಮನೆ ಭವಾನೀ ಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನತಗುಣಗಣ...

 
 
 
Manava Shodhisabeku ಮನವ ಶೋಧಿಸಬೇಕು ನಿತ್ಯಾ

ಮನವ ಶೋಧಿಸಬೇಕು ನಿತ್ಯಾ ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ ||ಮನವ|| ಧರ್ಮ ಅಧರ್ಮ ವಿಂಗಡಿಸಿ ಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ ಪರಬೊಮ್ಮ...

 
 
 

Comments


9916678573

©2022 by Madhwamaanasa. 

bottom of page